Slide
Slide
Slide
previous arrow
next arrow

ಡಿ.17ಕ್ಕೆ ‘ದಿ.ಎಸ್.ಆರ್.ಕಡವೆ ಜನ್ಮ ಶತಾಬ್ಧಿ ಆಚರಣಾ ಸಮಿತಿ’ ಉದ್ಘಾಟನೆ

300x250 AD

ಶಿರಸಿ: ದಿ.ಎಸ್.ಆರ್. ಕಡವೆ ಜನ್ಮ ದಿನಾಚರಣಾ ಸಮಿತಿ ವತಿಯಿಂದ ಟಿಆರ್‌ಸಿ ಹಾಗೂ ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹಾಗೂ ಶ್ರೀ ಎಸ್.ಆರ್. ಕಡವೆ ಅಭ್ಯುದಯ ಸಂಸ್ಥೆ ಸಹಯೋಗದಲ್ಲಿ ದಿ. ಶ್ರೀಪಾದ ಹೆಗಡೆ ಕಡವೆಯವರ 98ನೇ ಜನ್ಮದಿನಾಚರಣೆ ಅಂಗವಾಗಿ ‘ದಿ.ಎಸ್.ಆರ್.ಕಡವೆ ಜನ್ಮ ಶತಾಬ್ಧಿ ಆಚರಣಾ ಸಮಿತಿ’ ಉದ್ಘಾಟನೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಡಿ.17, ರವಿವಾರ ಮಧ್ಯಾಹ್ನ 3 ಗಂಟೆಯಿಂದ ಎಪಿಎಂಸಿ ಯಾರ್ಡ್‌ನ ಟಿಆರ್‌ಸಿ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಹಿರಿಯ ಸಹಕಾರಿ, ನಿವೃತ್ತ ಪ್ರಾಚಾರ್ಯರಾದ ಎಂ.ಎಂ. ಹೆಗಡೆ, ಬಕ್ಕಳ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ಜಿ.ಟಿ. ಹೆಗಡೆ, ತಟ್ಟೀಸರ, ಟಿಆರ್‌ಸಿ ಉಪಾಧ್ಯಕ್ಷ ವಿಶ್ವಾಸ ಪುಂಡಲೀಕ ಬಲ್ಸೆ, ಚವತ್ತಿ, ಎಂಇಎಸ್ ನಿರ್ದೇಶಕ ಎಸ್.ಕೆ.ಭಾಗ್ವತ್ ಶಿರಸಿಮಕ್ಕಿ ಆಗಮಿಸಲಿದ್ದಾರೆ. ಹಿರಿಯ ಸಹಕಾರಿ ಎಸ್. ಜಿ. ಭಟ್, ಪುಟ್ಟನಮನೆ ಹಾಗೂ ಉತ್ತಮ ಪತ್ತಿನ ಮಹಿಳಾ ಸಹಕಾರಿ ಸಂಘಗಳಿಗೆ ಸನ್ಮಾನ ನಡೆಯಲಿದ್ದು, ಸಹಕಾರಿ ಲೆಕ್ಕಪರಿಶೋಧನಾ ಇಲಾಖೆ ನಿವೃತ್ತ ಉಪನಿರ್ದೇಶಕ ಜಿ. ಕೆ. ರಾಮಪ್ಪ ಉಪನ್ಯಾಸ ನೀಡಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top